Sunday, 31 July 2016


ಎಂ. ಎಲ್‌. ಸಾಮಗ ಮತ್ತು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ

ಲೇಖಕರು : ನಾರಾಯಣ ಎಂ. ಹೆಗಡೆ
ಮ೦ಗಳವಾರ, ಮೇ 31 , 2016
ಉಡುಪಿಯ ಯಕ್ಷಗಾನ ಕಲಾರಂಗವು ಪ್ರತಿವರ್ಷ ಮೇ ತಿಂಗಳಿನ ಉತ್ತರಾರ್ಧದಲ್ಲಿ ತಾಳಮದ್ದಲೆ ಸಪ್ತಾಹವನ್ನು ಹಮ್ಮಿಕೊಳ್ಳುತ್ತದೆ. ಸಪ್ತಾಹದ ಸಮಾರೋಪ ಸಮಾರಂಭದಂದು ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತಾಳಮದ್ದಲೆ ಕ್ಷೇತ್ರದ ಹಿರಿಯ ಸಾಧಕರೀರ್ವರಿಗೆ ನೀಡುವುದು ಯಕ್ಷಗಾನ ಕಲಾರಂಗ ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಈ ವರ್ಷ ಪೆರ್ಲ ಕೃಷ್ಣ ಭಟ್‌ ಪ್ರಶಸ್ತಿಯನ್ನು ಪ್ರೊ| ಎಂ. ಎಲ್‌. ಸಾಮಗರವರಿಗೆ 29-5-2016ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು , ಮಟ್ಟಿ ಮುರಲೀಧರ ರಾವ್‌ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಸಿದ್ಧಕಟ್ಟೆಗೆ ತೆರಳಿ ಅಜ್ಜಿಬೆಟ್ಟು ನಿವಾಸದಲ್ಲಿ ತೀವ್ರ ಅನಾರೋಗ್ಯದಿ೦ದ ಇದೀಗ ಚೇತರಿಸುತ್ತಿರುವ ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು.

ಪ್ರೊ| ಎಂ. ಎಲ್‌ ಸಾಮಗ

ಯಕ್ಷಗಾನಕ್ಕೆ ಮಲ್ಪೆ ಸಾಮಗ ಮನೆ ತನದ ಕೊಡುಗೆ ಗಮನಾರ್ಹ. ಮಲ್ಪೆ ಶಂಕರನಾರಾಯಣ ಸಾಮಗ, ಮಲ್ಪೆ ರಾಮದಾಸ ಸಾಮಗರು ಹರಿಕಥೆ, ಯಕ್ಷಗಾನ ಮತ್ತು ಅರ್ಥಗಾರಿಕೆಗೆ ತಮ್ಮ ವಿಶಿಷ್ಟ ಕಲಾಸ್ಪರ್ಶದ ವಾಚಿಕ ವೈಭವದಿಂದ ಹೊಸ ಮಾರ್ಗ ನಿರ್ಮಿಸಿದ ಪ್ರಾತಃಸ್ಮರಣೀಯರು.

ಪ್ರೊ| ಎಂ. ಎಲ್‌ ಸಾಮಗ
ದೊಡ್ಡ ಸಾಮಗರೆಂದೇ ಖ್ಯಾತರಾದ ಶಂಕರ ನಾರಾಯಣ ಸಾಮಗರ ಸುಪುತ್ರ ಮಲ್ಪೆ ಲಕ್ಷ್ಮೀನಾರಾಯಣ ಸಾಮಗರು ಆಂಗ್ಲಭಾಷೆ ಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಮೂಲ್ಕಿ ವಿಜಯ ಕಾಲೇಜಿನಲ್ಲಿ ವೃತ್ತಿ ಬದುಕು ಆರಂಭಿಸಿ, ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತರಾಗಿದ್ದಾರೆ.

ವಂಶಪಾರಂಪರ್ಯವಾಗಿ ಬಂದ ಕಲಾಸಕ್ತಿ ಮತ್ತು ಕಲಾಭ್ಯಾಸವನ್ನು ನಿರಂತರ ಉಳಿಸಿ ಬೆಳೆಸಿಕೊಂಡು ಬಂದು ವೃತ್ತಿ ಬದುಕಿಗೆ ತೊಡಕಾಗದಂತೆ ಈ ಪೃವೃತ್ತಿಯನ್ನು ಪೋಷಿಸಿದವರು. ಆದ್ದರಿಂದಲೇ ವೃತ್ತಿ ಕಲಾವಿದರಿಗೆ ಸಮದಂಡಿಯಾಗಿ ನಿಲ್ಲಬಲ್ಲ ಹವ್ಯಾಸಿ ಕಲಾವಿದರೆಂದು ಮಾನ್ಯರು. ತೆಂಕು ಬಡಗು ಎರಡೂ ತಿಟ್ಟುಗಳಲ್ಲಿ ಕಲಾಪ್ರೌಢಿಮೆ ಮೆರೆಯಬಲ್ಲ ವಿದಗ್ಧರು. ನಿಲುವು, ಅಭಿನಯ, ಮಾತುಗಾರಿಕೆಯಿಂದ ವೇಷಧಾರಿಯಾಗಿ ಅವರ ನಿರ್ವಹಣೆ ಕಲಾಸಕ್ತರ ಮೆಚ್ಚುಗೆ ಗಳಿಸಿದೆ. ಇಂಗ್ಲಿಷ್‌, ಹಿಂದಿ ಯಕ್ಷಗಾನದ ಮೂಲಕ ಅನ್ಯ ರಾಜ್ಯದೇಶಗಳಿಗೂ ಈ ಕಲೆಯ ಪ್ರಸಾರಕ್ಕೆ ಕಾರಣರು. ತಮ್ಮ ವಿಸ್ತೃತ ಪುರಾಣ ಜ್ಞಾನ ಮತ್ತು ಲೋಕಾನುಭವದಿಂದ ತಾಳಮದ್ದಲೆ ಅರ್ಥಧಾರಿಯಾಗಿ ಪ್ರಸಿದ್ಧರು.

ನಾಟಕ ನಟರಾಗಿ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.ಕಲಾಸಂಬಂಧಿ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಹೊಸ ಚಿಂತನೆಗೆ ಇಂಬು ಕೊಟ್ಟಿದ್ದಾರೆ. ಗಮಕ ವಾಚನದ ಪ್ರವಚನಕಾರರಾಗಿ ಪೌರಾಣಿಕ ಸಂದರ್ಭ ಸನ್ನಿವೇಶಗಳನ್ನು ಸೊಗಸಾಗಿ ಕಟ್ಟಿಕೊಡುತ್ತಾರೆ. ರಂಗ ಪ್ರಯೋಗ ಪ್ರದರ್ಶನಗಳ ವಿಮರ್ಶಕರಾಗಿ ಗಮನ ಸೆಳೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಗಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಒಬ್ಬ ಪ್ರಜ್ಞಾವಂತ ಪ್ರೇಕ್ಷಕನಾಗಿ ಕುಳಿತು ಕಲಾಸ್ವಾದನೆ ಮಾಡುವ ಅವರ ಸಹೃದಯತೆ ಅನುಕರಣೀಯ.

ಅವರ ಮನೆ ಕಲಾಯತನದ ಎಲ್ಲ ಸದಸ್ಯರು ಕಲಾವಿದರೇ. ಪತ್ನಿ ಪ್ರತಿಭಾ ಸಾಮಗ ಸಂಗೀತ-ನೃತ್ಯ ಕಲಾವಿದೆ, ಕಲಾ ವಿಮರ್ಶಕಿ. ಮಗ ಹರ್ಷ ತಬಲಾ ವಾದಕ. ಮಗಳು ಅಪರ್ಣಾ ನೃತ್ಯ ವಿದುಷಿ. ಸಂಸ್ಕೃತಿ ಸಂಪನ್ನ ಸರಳ ಸಾತ್ವಿಕ ವ್ಯಕ್ತಿತ್ವದ ಪ್ರೊ| ಸಾಮಗರ ವ್ಯಕ್ತಿತ್ವ ಮಾದರಿಯಾಗಿ ನಿಲ್ಲಬಲ್ಲ ಸಮತೂಕದ ಪ್ರತೀಕ.

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ

ಯಕ್ಷಗಾನದ ವೇಷಧಾರಿಯಾಗಿ ಉಭಯ ತಿಟ್ಟುಗಳಲ್ಲಿ ಕಲಾಪ್ರೌಢಿಮೆ ಮೆರೆದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ತಾಳಮದ್ದಲೆ ಅರ್ಥಧಾರಿ ಯಾಗಿಯೂ ಸಿದ್ಧಿ ಪ್ರಸಿದ್ಧಿ ಪಡೆದವರು.

ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟಿನಲ್ಲಿ ಕೊರಗ ಶೆಟ್ಟಿ -ರೇವತಿ ಶೆಡ್ತಿ ದಂಪತಿಯ ಸುಪುತ್ರರಾಗಿ ಜನಿಸಿದ ಸಿದ್ಧಕಟ್ಟೆಯವರು ಪದವಿಪೂರ್ವ ವಿದ್ಯಾಭ್ಯಾಸ ಪೂರೈಸಿ ಯಕ್ಷಗಾನದ ಸೆಳೆತದಿಂದ ಇದನ್ನೇ ವೃತ್ತಿಯಾಗಿ ಸ್ವೀಕರಿಸಿ ಬದುಕು ಕಟ್ಟಿಕೊಂಡವರು. ಕಾವೂರು ಕೇಶವರಲ್ಲಿ ಯಕ್ಷಗಾನಾಭ್ಯಾಸ. ತೆಂಕುತಿಟ್ಟಿನ ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ ಮೇಳಗಳಲ್ಲಿ ಕಲಾವ್ಯವಸಾಯ ಮಾಡಿ ಬಡಗಿನ ಸಾಲಿಗ್ರಾಮ ಮೇಳದಲ್ಲಿ ಕಲಾಸೇವೆಗೈದವರು. ಸುಮಾರು ನಾಲ್ಕು ದಶಕಗಳಿಂದ ಈ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು.

ಪುಂಡುವೇಷ, ಪೋಷಕಪಾತ್ರಗಳ ಮೂಲಕ ಕಲಾಸಕ್ತರ ಗಮನ ಸೆಳೆದು ಸುಧನ್ವ, ಕೃಷ್ಣ, ರಾಮ, ವಾಲ್ಮೀಕಿ, ಪರಶುರಾಮ ಮೊದಲಾದ ಪೌರಾಣಿಕ ಪಾತ್ರಗಳನ್ನು ಸೊಗಸಾಗಿ ಚಿತ್ರಿಸಿದವರು. ಸೌಮ್ಯ ಪಾತ್ರದಲ್ಲಿ, ನಿರ್ವಹಣೆಯಲ್ಲಿ ಅಪೂರ್ವ ಯಶಸ್ಸು ಪಡೆದವರು. ತುಳು ಯಕ್ಷಗಾನದಲ್ಲೂ ತಮ್ಮ ಛಾಪು ಒತ್ತಿರುವ ವಿಶ್ವನಾಥ ಶೆಟ್ಟರು ಎಲ್ಲೆಡೆ ಸಲ್ಲಬಹುದಾದ ಬೇಡಿಕೆಯ ಕಲಾವಿದ.

ಅರ್ಥಧಾರಿಯಾಗಿ ತಮ್ಮನ್ನು ಸ್ಥಾಪಿಸಿಕೊಂಡ ಇವರು ಚುಟುಕಾದ, ಚೊಕ್ಕ ಮಾತಿನ ಮೂಲಕ ರಸಿಕರ ಮನಗೆದ್ದವರು. ಯಾವುದೇ ಪಾತ್ರವಿರಲಿ ಅದರ ಸ್ವಭಾವ ತಿಳಿದು ವ್ಯವಹರಿಸುವ ಕಲಾಪ್ರಜ್ಞೆ, ಕಾಲಪ್ರಜ್ಞೆ ಎರಡನ್ನೂ ಮೀರದೆ ಪ್ರೇಕ್ಷಕರಿಗೆ ಮುದನೀಡಿದವರು. ಔಚಿತ್ಯವರಿತು ಆಡುವ, ಮಾತಿನ ಹಿಡಿತ ಸಾಧಿಸಿದ ಅರ್ಥಧಾರಿ.

ಪ್ರಸಂಗಕರ್ತರಾಗಿ ಚಾಣಕ್ಯತಂತ್ರ, ವಿಷಮ ಸಮರಂಗ, ಕನ್ಯಾಂತರಂಗ ಮೊದಲಾದ ಹತ್ತಾರು ಪ್ರಸಂಗಗಳನ್ನು ರಚಿಸಿದ್ದಾರೆ. ಉತ್ಕೃಷ್ಟ, ಸಾಹಿತ್ಯ, ಪೌರಾಣಿಕ ಹೊಸ ಸಂದೇಶದ ಕಾರಣಕ್ಕೆ ವಿದ್ವಾಂಸರಿಂದ ಮಾನಿತರು. ರಂಗನಿರ್ದೇಶನದ ಕುರಿತಂತೆ ಅಪಾರ ಅನುಭವವಿರುವ ಇವರು ಎಳೆಯ ಕಲಾವಿದರಿಗೆ ಮಾರ್ಗದರ್ಶಕ. ಅವರ ಬರಹವೂ ಮಾತಿನಂತೆ ನೇರ, ಸ್ಪಷ್ಟ. ಸಾಮಾಜಿಕ ಕಲಾಸಂಬಂಧಿ ವಿಷಯಗಳಿಗೆ ಪತ್ರಿಕೆಗಳಲ್ಲಿ ಸದಾ ಸ್ಪಂದಿಸುತ್ತಾ ನಾಗರಿಕ ಪ್ರಜ್ಞೆ ಕಾಪಿಟ್ಟುಕೊಂಡು ಬಂದವರು. ಪತ್ನಿ ಜಯಂತಿ, ಮೂವರು ಮಕ್ಕಳೊಂದಿಗೆ ಯಕ್ಷಶ್ರೀ ಮನೆಯಲ್ಲಿ ನೆಲೆನಿಂತಿದ್ದಾರೆ.

ಕೃಪೆ : udayavani
ಇತಿಹಾಸದ ಪುಟಕ್ಕೆ ಸಂದು ಹೋದ ಯಕ್ಷ ವಾಚಸ್ಮತಿ : ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ

ಲೇಖಕರು :
ಎಂ. ಶಾಂತಾರಾಮ ಕುಡ್ವ
ಶುಕ್ರವಾರ, ಜುಲೈ 1 , 2016

ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು. ಯಕ್ಷರಂಗಕ್ಕೆ ತೀವೃ ಆಘಾತ ತಂದ ಸುದ್ದಿ ಇದು. ಕಳೆದ ಐದು ತಿಂಗಳಿಂದ ಅನಾರೋಗ್ಯದಿಂದಿದ್ದ ಶೆಟ್ಟರ ನಿಧನ ಯಕ್ಷರಂಗಕ್ಕೆ ದೊಡ್ಡ ನಷ್ಟವನ್ನೇ ತಂದಿದೆ. ಸದಾ ನಗುಮೊಗದ, ಸರಳ, ನಿಗರ್ವಿ ವ್ಯಕ್ತಿತ್ವದ ಶೆಟ್ಟರು ಇನ್ನೀಗ ನೆನಪು ಮಾತ್ರವಾಗಿ ಇತಿಹಾಸದ ಪುಟಕ್ಕೆ ಸಂದು ಹೋದರು ಎಂದು ಬರೆಯುವುದೇ ವೇದನೆಯ ವಿಷಯ.

1955 ರಲ್ಲಿ ಜನಿಸಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ತೆಂಕು, ಬಡಗು ತಿಟ್ಟಿನ ಸುಪ್ರಸಿಧ್ಧ ವೇಷಧಾರಿ, ಅರ್ಥಧಾರಿ ಹಾಗೂ ಪ್ರಸಂಗಕರ್ತರು. ಅಸ್ಖಲಿತ ವಾಗ್ವೈಖರಿ, ಆಕರ್ಷಕ ಮಂಡನಾಕ್ರಮ, ಸುಂದರವಾದ ವಾದಸಂವಾದದ ಪ್ರಸ್ತುತಿ, ಸರಳ ಆದರೂ ಶುಧ್ಧ ಭಾಷಾ ಪ್ರಯೋಗ, ಇವೆಲ್ಲಾ ಮೇಳೈಸಿರುವದೇ ಶೆಟ್ಟಿಯವರ ಅರ್ಥಗಾರಿಕೆಯ ಹೆಚ್ಚುಗಾರಿಕೆ. ಪಿ. ಯು. ಸಿ. ಪೂರೈಸಿ, ಯಕ್ಷಗಾನ ರಂಗಕ್ಕೆ ಬಂದ ವಿಶ್ವನಾಥ ಶೆಟ್ಟರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದವರು. ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದ ತಿರುಗಾಟ ಶೆಟ್ಟರಿಗೆ ಯಕ್ಷಗಾನದ ಪಟ್ಟುಗಳನ್ನು ತಿಳಿಯುವ ವೇದಿಕೆಯಾಯಿತು. ಮೇಳದ ಲೆಕ್ಕಾಚಾರವನ್ನು ಬರೆಯುವ ಜವಾಬ್ದಾರಿ ಹೊಂದಿ, ವೇಷಗಳನ್ನೂ ನಿರ್ವಹಿಸುತ್ತಿದ್ದರು. ಕದ್ರಿಮೇಳದ "ಬೊಳ್ಳಿದಂಡಿಗೆ"ಯ ಜಿಪುಣ ಶೆಟ್ಟಿಯ ಪಾತ್ರ, "ಗರುಡಕೇಂಜವೆ"ಯ ದುಷ್ಟ ಮಂತ್ರಿ, "ಗೆಜ್ಜೆದಪೂಜೆ"ಯ ನಿಷ್ಟಾವಂತ ಮಂತ್ರಿ, "ಕದ್ರಿಕ್ಷೇತ್ರ ಮಹಾತ್ಮೆ"ಯ ಗೋರಕ್ಷನಾಥ, ಮಾತ್ರವಲ್ಲದೇ ಪೌರಾಣಿಕ ಪ್ರಸಂಗಗಳ ಶ್ರೀರಾಮ, ಶ್ರೀಕೃಷ್ಣ, ವಿದುರ, ಪರಶುರಾಮ, ಭೀಷ್ಮ ಮುಂತಾದ ಪಾತ್ರಗಳಲ್ಲಿ ಹೆಸರು ಗಳಿಸಿದರು. ಈ ಅವಧಿಯಲ್ಲೇ ಶೆಟ್ಟರು ಪ್ರಸಂಗಗಳನ್ನು ಬರೆಯಲಾರಂಭಿಸಿದ್ದರು. ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ ಮುಂತಾದ ತುಳು ಪ್ರಸಂಗಗಳೊಂದಿಗೇ ಪೌರಾಣಿಕ ಪ್ರಸಂಗವನ್ನೂ ಬರೆದು, ಅವೆಲ್ಲಾ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು.

" ವಿಷಮ ಸಮರಂಗ" , ಕನ್ಯಾಂತರಂಗ, ಚಾಣಾಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರಿ, ಜ್ವಾಲಾಜಾಹ್ನವೀ, ಶ್ರೀರಾಮಸೇತು ಮುಂತಾದ ಪೌರಾಣಿಕ ಪ್ರಸಂಗಗಳು ಶೆಟ್ಟರಿಂದಲೇ ರಚಿಸಲ್ಪಟ್ಟ ಕೃತಿಗಳು.

ಕದ್ರಿ ಮೇಳ ನಿಂತಾಗ ಶೆಟ್ಟರು ಕರ್ಣಾಟಕ ಮೇಳ ಸೇರಿದರು. ಈ ಅವಧಿಯಲ್ಲೇ ಶೆಟ್ಟರ ಅದ್ಭುತ ಪ್ರತಿಭೆ ಹೊರಹೊಮ್ಮಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಶ್ರೇಷ್ಟ ಪ್ರಸಂಗ ಕೃತಿಯಾದ" ಮಾನಿಷಾದ" ದ ಪ್ರಧಾನ ಪಾತ್ರವಾದ "ವಾಲ್ಮೀಕಿ" ಪಾತ್ರ ಶೆಟ್ಟರಿಗೆ ದೊರಕಿತು. ವಿಶ್ವನಾಥ ಶೆಟ್ಟರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಅಸ್ಖಲಿತವಾದ ಮಾತುಗಾರಿಕೆ, ಭಾವಾಭಿನಯ ಹಾಗೂ ತಾವೇ ಸ್ವತಃ ಪ್ರಸಂಗಕರ್ತರಾದ ಕಾರಣ, ವಾಲ್ಮೀಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು. ವಾಲ್ಮೀಕಿ ಪಾತ್ರ ಅತ್ಯಂತ ಜನಪ್ರಿಯತೆ ಗಳಿಸಿ ಶೆಟ್ಟರು, ಪ್ರಸಿಧ್ಧಿಯಾದರು. ಉತ್ತಮ ಪ್ರಸಂಗಕರ್ತರಾಗಿ ಬೊಟ್ಟಿಕೆರೆಯವರು" ಅಭಿನವ ವಾಲ್ಮೀಕಿ" ಎನಿಸಿಕೊಂಡರೆ, ಶೆಟ್ಟರು ವಾಲ್ಮೀಕಿಯ ಪಾತ್ರ ನಿರ್ವಹಣೆಯಿಂದ" ಯಕ್ಷರಂಗದ ವಾಲ್ಮೀಕಿ" ಎನಿಸಿಕೊಂಡರು. ವಾಲ್ಮೀಕೀ ರಾಮಾಯಣದ ಶ್ಲೋಕ, ಅರ್ಥ, ಭಾವಾರ್ಥ ಗಳೆಲ್ಲವನ್ನೂ ತಮ್ಮ ಪಾತ್ರ ಪೋಷಣೆಗೆ ಸಮರ್ಥವಾಗಿ ಬಳಸಿದರು. ಪರಿಣಾಮವಾಗಿ ಶೆಟ್ಟರ ವಾಲ್ಮೀಕಿ ಜನಮಾನಸದಲ್ಲಿ ಪ್ರತಿಷ್ಟೆಗೊಂಡಿತು. " ಮಾನಿಷಾದ" ದ ಭರ್ಜರಿ ಯಶಸ್ಸಿಗೆ" ವಾಲ್ಮೀಕಿಯ ಕೊಡುಗೆ" ಯೂ ಸೇರಿಕೊಂಡಿತು. ಇಂದಿಗೂ " ಮಾನಿಷಾದ" ಎಂದಾಗ ಶೆಟ್ಟರ ವಾಲ್ಮೀಕಿ ಪಾತ್ರವೇ ಕಣ್ಣ ಮುಂದೆ ನಿಲ್ಲುವಷ್ಟು ಆ ಪಾತ್ರವನ್ನು ಕಟೆದು ನಿಲ್ಲಿಸಿದ್ದರು.

ಮುಂದೆ ಕರ್ಣಾಟಕ ಮೇಳ ತನ್ನ ತಿರುಗಾಟ ನಿಲ್ಲಿಸುವ ಹಂತದಲ್ಲಿರುವಾಗ, ಶೆಟ್ಟರಿಗೆ ಬಡಗಿನ ಸಾಲಿಗ್ರಾಮ ಮೇಳದಿಂದ ಬೇಡಿಕೆ ಬಂತು. ಸಾಲಿಗ್ರಾಮ ಮೇಳಕ್ಕೆ " ಮಾತಾಡುವ" ಕಲಾವಿದರ ಅನಿವಾರ್ಯತೆಯಿದ್ದಾಗ, ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರಿಗೆ ಹೊಳೆದದ್ದು, ವಿಶ್ವನಾಥ ಶೆಟ್ಟರ ಹೆಸರು. ಅಂತೂ ಶೆಟ್ಟರು, ಸಾಲಿಗ್ರಾಮ ಮೇಳ ಸೇರಿ, ಅಲ್ಲೂ ಮಾತುಗಾರಿಕೆಯಿಂದ ವಿಜೃಂಭಿಸಲಾರಂಭಿಸಿದರು. ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ಹನೂಮಂತ, ಈಶ್ವರ ಮುಂತಾದ ಪಾತ್ರಗಳ ನಿರ್ವಹಣೆಯಿಂದ ಬಡಗಿನ ಅಭಿಮಾನಿಗಳ ಮನ ರಂಜಿಸಿದರು. ಕಾಲ್ಪನಿಕ ಪ್ರಸಂಗವಾದ" ಅಗ್ನಿನಕ್ಷತ್ರ" ದ ಮಂತ್ರಿಯ ಪಾತ್ರ, ಈಶ್ವರೀ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ ಪ್ರಸಂಗಗಳ ಪಾತ್ರಗಳೆಲ್ಲಾ ಶೆಟ್ಟರಿಗೆ ಹೆಸರು ತಂದ ಪಾತ್ರಗಳು. ಇತ್ತೀಚೆಗೆ ಹಿರಿಯಡ್ಕ ಮೇಳದ ತಿರುಗಾಟದಲ್ಲೇ ಶೆಟ್ಟರು ಗಂಭೀರ ಸ್ತಿತಿಯಲ್ಲಿ ಅನಾರೋಗ್ಯಕ್ಕೊಳಗಾದರು.

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ" ಎಂದಾಕ್ಷಣ ಜನಸಾಮಾನ್ಯ ಪ್ರೇಕ್ಷಕರು ಇವರು ಯಕ್ಷರಂಗದ ಸುಪ್ರಸಿಧ್ಧ ಕಲಾವಿದ, ಇತ್ತೀಚೆಗೆ ನಮ್ಮನ್ನು ಅಗಲಿದ, ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಖಾಸಾ ತಮ್ಮ ಎಂದೇ ಭಾವಿಸಿದ್ದಾರೆ. ಇದಕ್ಕೆ ಕಾರಣ " ಸಿದ್ದಕಟ್ಟೆ" ಎಂಬ ಊರು ಎಂಬುದು ಮಾತ್ರ ಕಾರಣವಲ್ಲ, ಮಾತುಗಾರಿಕೆಯಲ್ಲೂ, ವಿಶ್ವನಾಥ ಶೆಟ್ಟರ ಪ್ರಬುಧ್ಧತೆಯಿಂದಾಗಿ. ಆದರೆ, ವಿಶ್ವನಾಥ ಶೆಟ್ಟರು, ಚೆನ್ನಪ್ಪ ಶೆಟ್ಟರಿಗೆ ಸಂಬಂಧದಲ್ಲಿ ತಮ್ಮನೇ ಹೊರತು ಖಾಸಾ ತಮ್ಮನಲ್ಲ. ಆದರೂ, ಈ ಇಬ್ಬರು "ಸಿದ್ದಕಟ್ಟೆ" ಯವರ ಅರ್ಥಗಾರಿಕೆಯಲ್ಲಿಯ ವ್ಯತ್ಯಾಸ ಗಮನಾರ್ಹ.

ದಿ. ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿನಲ್ಲಿ "ಶೇಣಿ" ಯವರ ಪ್ರಭಾವ ಗುರುತಿಸಬಹುದು. ಪದ್ಯಗಳಲ್ಲಿ ಬರುವ ಶಬ್ದಾರ್ಥಗಳನ್ನು ವಿಶ್ಲೇಶಿಸಿ, ತನ್ನ ಪಾತ್ರ ಪೋಷಣೆಯನ್ನು ಪೀಠಿಕೆಯಲ್ಲೇ ಮಂಡಿಸುವ ಶೇಣಿಯವರ ಅದ್ಭುತ ಕಲೆಯನ್ನು ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲೂ ಕಾಣಬಹುದಾಗಿತ್ತು. ಎದುರು ಪಾತ್ರಧಾರಿ ದಾರಿ ತಪ್ಪಿದರೆ, ಕೂಡಲೇ ಖಂಡಿಸುವದು ಚೆನ್ನಪ್ಪ ಶೆಟ್ಟರ ಕ್ರಮ. ( ದಿ. ಶೇಣಿಯವರ ಅರ್ಥದಲ್ಲೂ ಇದನ್ನು ಗಮನಿಸಬಹುದು) ಆದರೆ, ವಿಶ್ವನಾಥ ಶೆಟ್ಟರ ಅರ್ಥ ದಿ. ರಾಮದಾಸ ಸಾಮಗರ ಅರ್ಥವನ್ನು ಹೋಲುತ್ತಿದೆ. ಪೀಠಿಕೆ, ಮಂಡನೆ, ಖಂಡನೆ, ವಾದ, ಸಂವಾದಗಳಲ್ಲಿ "ಸಾಮಗ" ಶೈಲಿ ಕಾಣಬಹುದಾಗಿದ್ದರೂ, ಸಾಮಗರ ಅನುಕರಣೆಯಾಗದೇ ಸ್ವಂತಿಕೆಯಿದೆ. ಸರಳ ಭಾಷೆ, ಆಕರ್ಷಕವಾದ ಮಾತುಗಾರಿಕೆಯು ವಿಶ್ವನಾಥ ಶೆಟ್ಟರ ಅರ್ಥಗಾರಿಕೆಯ ಜೀವಾಳ. ಎದುರು ಪಾತ್ರಧಾರಿ ತಪ್ಪಿ ಮಾತಾಡಿದರೆ, ನಗುನಗುತ್ತಾ ಹಾಸ್ಯದಿಂದಲೇ ಮರುತ್ತರ ನೀಡುತ್ತಿದ್ದರು. ಶುಧ್ದ ತುಳು ಭಾಷೆಯನ್ನು ತುಳು ಪ್ರಸಂಗಗಳಲ್ಲಿ ಪ್ರಸ್ತುತಪಡಿಸುವ ಕಲೆ ವಿಶ್ವನಾಥ ಶೆಟ್ಟರಿಗೆ ಸಿಧ್ದಿಸಿತ್ತು. ತುಳುಭಾಷೆಯ ಸಾಹಿತ್ಯ ಜ್ಞಾನದಿಂದಾಗಿ ತುಳು ಗಾದೆ, ಒಗಟುಗಳನ್ನು ಧಾರಾಳವಾಗಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದರು.

ಭಾಷಣ, ಅಭಿನಂದನಾ ನುಡಿಗಳನ್ನು ಶೆಟ್ಟರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ನಮ್ಮ "ಯಕ್ಷಸಂಗಮ" ದ ಐದನೇ ವರ್ಷದ ಕಾರ್ಯಕ್ರಮದಂದು "ಮಿಜಾರು ಅಣ್ಣಪ್ಪ ಸಂಮಾನ" ದಂದು ಅಣ್ಣಪ್ಪರ ಸಹಕಲಾವಿದರಾದ, ವಿಶ್ವನಾಥ ಶೆಟ್ಟರು, ಅಭಿನಂದನಾ ಭಾಷಣ ಮಾಡಿ ಅಣ್ಣಪ್ಪರಿಂದಲೇ ಮೆಚ್ಚುಗೆ ಗಳಿಸಿದ್ದರು. ( ``ವಿಶ್ವನಾಥ ಶೆಟ್ಟರು ಇಷ್ಟೆಲ್ಲಾ ಹೇಳಿದ್ದು ನನ್ನ ಕುರಿತಾಗಿಯಾ ?`` ಎಂದು ಅಣ್ಣಪ್ಪರು ಸಂಮಾನಿತರ ಭಾಷಣದಲ್ಲಿ ಕೇಳಿದ್ದರು) ತಾಳಮದ್ದಳೆಯಲ್ಲೂ ತಮ್ಮ ಛಾಪನ್ನು ಒತ್ತಿದ ವಿಶ್ವನಾಥ ಶೆಟ್ಟರು ಶ್ರೀರಾಮ, ಶ್ರೀಕೃಷ್ಣ, ಸುಗ್ರೀವ, ಪರಶುರಾಮ, ಭೀಷ್ಮ, ಶಂತನು, ಹನೂಮಂತ, ಸುಧನ್ವ ಮುಂತಾದ ಸಾತ್ವಿಕ ಪಾತ್ರಗಳಲ್ಲಿ ಮಿಂಚಿದಂತೆ ಸಾಲ್ವ, ದುಷ್ಟಬುಧ್ಧಿ, ಕೌರವ ದಂಥಹ ಖಳ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ನಗುನಗುತ್ತಾ ಎದುರು ಪಾತ್ರಧಾರಿಗಳ ವಾದಗಳಿಗೆ ಪ್ರತ್ಯುತ್ತರ ಕೊಡುವ ಶೈಲಿ ಅಸದೃಶ. ಸಹ ಕಲಾವಿದರೊಂದಿಗೆ ಆತ್ಮೀಯರಾಗಿರುತ್ತಿದ್ದ ಶೆಟ್ಟರು, ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಚೆನ್ನಪ್ಪ ಶೆಟ್ಟರ ಬಗ್ಗೆ ಅಪಾರ ಗೌರವ ಹೊಂದಿದ್ದ ಶೆಟ್ಟರು, ಚೆನ್ನಪ್ಪ ಶೆಟ್ಟರ ಅಕಾಲ ನಿಧನದಿಂದಾಗಿ ಸ್ವಲ್ಪ ಕಾಲ ಅಧೀರರಾಗಿದ್ದುದು ಸತ್ಯ. ಚೆನ್ನಪ್ಪ ಶೆಟ್ಟರ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೆಲ್ಲಾ , ಚೆನ್ನಪ್ಪ ಶೆಟ್ಟರ ಬಗ್ಗೆ ಮಾತಾಡುವಾಗ ಅಳುತ್ತಿದ್ದರು. " ಚೆನ್ನಪ್ಪ ಶೆಟ್ಟಿ" ಯವ ರಿರುವಾಗ ಕರಪತ್ರಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ" ಸಿದ್ದಕಟ್ಟೆ ದ್ವಯರು" ಎಂಬ ಶಬ್ದ ಇನ್ನು ಕಾಣಲಾಗದು" ಎಂದು ಕಂಬನಿ ಮಿಡಿದಿದ್ದರು. ( ಚೆ. ಶೆಟ್ಟಿ × ವಿ. ಶೆಟ್ಟಿ ಯವರನ್ನು ಒಟ್ಟಾಗಿ ಸಿದ್ದಕಟ್ಟೆದ್ವಯರು ಎಂದು ಬರೆಯುವ ರೂಢಿಯಿತ್ತು )

ಎರಡು ತಿಂಗಳ ಹಿಂದೆ ಶೆಟ್ಟರ ಆರೈಕೆ ನೋಡುತ್ತಿದ್ದ ಡಾ. ಪದ್ಯಾಣ ಸುಬ್ರಹ್ಮಣ್ಯರೊಂದಿಗೆ ಶೆಟ್ಟರ ಮನೆಗೆ ಹೋದಾಗ "ಕುಡ್ವರೇ, ನಾನು ಮರಳಿ ಅರ್ಥ ಹೇಳಲಾಗುತ್ತದೆಯಲ್ಲವೇ ?" ಎಂದು ನನ್ನಲ್ಲಿ ಪ್ರಶ್ನಿಸಿದ್ದರು. ಮರಳಿ ಯಕ್ಷರಂಗಕ್ಕೆ ಬರಬೇಕೆಂಬ ಹಂಬಲ ಶೆಟ್ಟರಿಗಿತ್ತು . ಆದರೂ ವಿಧಿಯ ಎದುರು ಯಾರಾದರೂ ನಿಲ್ಲಬಲ್ಲರೇ ?

ಆಟಕೂಟಗಳ ಸರದಾರ, ಪ್ರಸಂಗಕರ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು, ಇಂದು ಯಕ್ಷರಂಗವನ್ನು ಅಗಲಿದ್ದಾರೆ. ಅವರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿ ನೀಡಲಿ, ಅಗಲಿದ ಶೆಟ್ಟರ ಆತ್ಮಕ್ಕೆ "ಸದ್ಗತಿ" ದೊರಕಲಿ ಎಂದು ಪರಮಾತ್ಮನಲ್ಲಿ ಹಾಗೂ ಕಲಾಮಾತೆಯಲ್ಲಿ ಪ್ರಾರ್ಥನೆ.

***********************


ಕೃಪೆ : ವಾಟ್ಸಪ್ ಗು೦ಪಿನಿ೦ದ
ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ

ಲೇಖಕರು : ಉದಯವಾಣಿ
ಶುಕ್ರವಾರ, ಜುಲೈ 1 , 2016
ಜುಲೈ 1 , 2016

ಯಕ್ಷ ವಾಚಸ್ಪತಿ, ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವಿಧಿವಶ

ಮಂಗಳೂರು : ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದ, ಹೆಸರಾಂತ ಅರ್ಥಧಾರಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ (71ವರ್ಷ) ಅವರು ಅನಾರೋಗ್ಯದಿಂದ ಇಂದು (ಶುಕ್ರವಾರ) ಬೆಳಿಗ್ಗೆ 9. 15 ಕ್ಕೆ ನಿಧನ ಹೊಂದಿದರು.

ಯಕ್ಷವಾಚಸ್ಪತಿ ಎಂಬ ಬಿರುದಾಂಕಿತರಾದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ಕನ್ನಡ ಮತ್ತು ತುಳುವಿನ ಶ್ರೇಷ್ಠ ಪ್ರಸಂಗಕರ್ತರಾಗಿಯೂ ಹೆಸರುವಾಸಿಯಾಗಿದ್ದರು. ವಿಶ್ವನಾಥ ಶೆಟ್ಟಿ ಅವರು ಕೆಲದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟುವಿನಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಇವರು ಪದವಿ ಪೂರ್ವ ಶಿಕ್ಷಣ ಪಡೆದಿದ್ದರು.

ಕನ್ನಡದಲ್ಲಿ ಶ್ರೀ ರಾಮ ಸೇತು, ವರ್ಣವೈಷಮ್ಯ, ವಿಷಮ ಸಮರಂಗ, ಕನ್ಯಾಂತರಂಗ, ಜ್ವಾಲಾ ಜಾಹ್ನವಿ, ಶಶಿವಂಶವಲ್ಲರಿ, ಚಾಣಕ್ಯತಂತ್ರ ಮುಂತಾದ ಪ್ರಸಂಗವನ್ನು ರಚಿಸಿದ್ದರೆ, ತುಳುವಿನಲ್ಲಿ ಬೆಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆ ಪ್ರಸಂಗ ಬರೆದಿದ್ದಾರೆ. ವಿಶ್ವನಾಥ ಶೆಟ್ಟಿಯವರೇ ರಚಿಸಿ ನಿರ್ದೇಶಿಸಿದ್ದ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿತ್ತು.

ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಬಳಿಕ ಕದ್ರಿ, ಕರ್ನಾಟಕ, ಮಂಗಳಾದೇವಿ ಸಾಲಿಗ್ರಾಮ, ಸದ್ಯ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತಿದ್ದರು. ದಾಮೋದರ ಮಂಡೆಚ್ಚರು, ಬಲಿಪರು, ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಡಿಯಾಗಿದ್ದರು.

ಪ್ರಸಿದ್ಧ ಪ್ರಸ೦ಗಕರ್ತ, ತಾಳಮದ್ದಳೆಯ ಬೇಡಿಕೆಯ ವಾಗ್ಮಿಯಾಗಿ, ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.

Tuesday, 26 July 2016

Tuesday, 19 July 2016


SIDDAKATTE VISHWANATHA SHETTY

The Great Yakshagana Writer,Director and Actor Born on July 24, 1957, at Ajjibettu, Bantwal taluk in Dakshina Kannada district, Shetty was known for his oratory skills and giving life to any role during the performance. He was equally famous in Talamaddale as an eminent interpreter.
Having no Yakshagana background in the family, Shetty excelled in the art due to his persistent efforts. He learnt the art of Yakshagana dance from Kavoor Keshava. He started the career with Kateel Mela after completing the higher secondary education and later worked with Kadri, Karnataka, Mangaladevi and Saligrama Melas. Presently, he was with the Hiriyadka Mela.
He learnt the art of Yakshagana dance from Kavoor Keshava. He started the career with Kateel Mela after completing the higher secondary education and later worked with Kadri, Karnataka, Mangaladevi and Saligrama Melas. Presently, he was with the Hiriyadka Mela.

Monday, 18 July 2016


                                          




 ಮರೆಯಾದ ಯಕ್ಷ ವಾಚಸ್ಪತಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ


ಸಂಗೀತ, ಸಾಹಿತ್ಯ, ನೃತ್ಯ, ವರ್ಣಾಲಂಕಾರಗಳ ಸಮಪಾಕದಿಂದ ಸಿದ್ಧಗೊಳ್ಳುವ ವಿಶಿಷ್ಟ ರಂಗಪ್ರಕಾರವಾದ ಯಕ್ಷಗಾನದಲ್ಲಿ ನೂರಾರು ಕಲಾವಿದರು ತಮ್ಮ ಪ್ರತಿಭಾ ಪ್ರಪೂರ್ಣತೆಯಿಂದ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅಂಥವರಲ್ಲಿ ವಿವಿಧ ಬಗೆಯ ರಂಗತಾಲೀಮು, ತರಬೇತಿ ಹಾಗೂ ಎಡೆಬಿಡದ ಪರಿಶ್ರಮದಿಂದ ಯಕ್ಷಗಾನದ ವಿವಿಧಾಂಗಗಳಲ್ಲಿ ಪಳಗಿ ದವರಿದ್ದಾರೆ. ಆದರೆ ಯಕ್ಷಗಾನದ ವಾಚಿಕ ವಿಭಾಗ ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯುವುದಿಲ್ಲ. ನುರಿತ ನಿರ್ದೇಶನ‌ದಲ್ಲಿ ತರಬೇತಿ ಪಡೆದು ಓರ್ವ ಸಮರ್ಥ ವೇಷಧಾರಿಯಾಗಬಲ್ಲ; ಆದರೆ ಅರ್ಥಧಾರಿಯಾಗಲು ಸತತ ಅಭ್ಯಾಸ, ಆಳವಾದ ಅಧ್ಯಯನ ಹಾಗೂ ಸ್ವತಂತ್ರ ಚಿಂತನೆಗಳ ಅಗತ್ಯವಿದೆ. ಆದ್ದರಿಂದಲೇ ತಲೆಮಾರುಗಳಿಂದ ಲೆಕ್ಕ ಹಾಕಿದರೂ ಯಕ್ಷಗಾನದ ಹೆಸರಾಂತ ಅರ್ಥಧಾರಿಗಳ ಸಂಖ್ಯೆ ಇನ್ನೂ ನೂರರ ಆಸುಪಾಸಿನಲ್ಲೇ ಇದೆ.
ಅರ್ಥಗಾರಿಕೆಯಂತೆ ಪ್ರಸಂಗ ರಚನೆಯೂ ವಿಶೇಷ ಪರಿಶ್ರಮ ಬಯಸುವ ಕ್ಷೇತ್ರ. ಇಲ್ಲಿ ಕಾವ್ಯ ಶಕ್ತಿಯೊಂದಿಗೆ ಛಂದಸ್ಸು, ಅಲಂಕಾರ, ಯತಿ ಗಣ ಪ್ರಾಸಗಳ ಅಗಾಧ ಅನುಭವ ಬೇಕಾಗುತ್ತದೆ. ಈಚೆಗೆ ಯಕ್ಷಗಾನ ಪ್ರಸಂಗಕರ್ತರ ಸಂಖ್ಯೆ ಯೇನೂ ಕಡಿಮೆಯಿಲ್ಲ. ಆದರೆ ಅವರಲ್ಲಿ ಅಗ್ರಪಂಕ್ತಿಯಲ್ಲಿ ಗಣಿಸಲ್ಪಡುವವರು ಬೆರಳೆಣಿಕೆಯ ಮಂದಿ. ಅಂಥವರಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಒಬ್ಬರು. ಅವರು ಯಕ್ಷಗಾನ ವೇಷಧಾರಿಯಾಗಿದ್ದುದರ ಜತೆಗೆ ಒಬ್ಬ ಜನಪ್ರಿಯ ಅರ್ಥಧಾರಿ ಮತ್ತು ಪ್ರಸಂಗಕರ್ತನಾಗಿದ್ದರು. ತೆಂಕು ಹಾಗೂ ಬಡಗುತಿಟ್ಟಿನ ಯಕ್ಷರಂಗದಲ್ಲಿ ಸಮಾನವಾಗಿ ಹೊಕ್ಕು ಬಳಕೆಯಿರುವ ಓರ್ವ ಶ್ರೇಷ್ಠ ಕಲಾಕಾರ ಅವರಾಗಿದ್ದರು.
ಯಕ್ಷಗಾನ ರಂಗದಲ್ಲಿ "ಸಿದ್ಧಕಟ್ಟೆದ್ವಯರು' ಅರ್ಥಗಾರಿಕೆಯ ಅಮೂಲ್ಯ ರತ್ನಗಳು. ಚೆನ್ನಪ್ಪ ಶೆಟ್ಟಿ ಹಾಗೂ ವಿಶ್ವನಾಥ ಶೆಟ್ಟಿ ಇವರಿಬ್ಬರ ಅರ್ಥಗಾರಿಕೆಯನ್ನು ಕೇಳಿ ತಲೆದೂಗಿದವರು ಈ ಮಾತನ್ನು ಒಪ್ಪಲೇಬೇಕು. ಚೆನ್ನಪ್ಪರದ್ದು ಶೇಣಿಯವರ ದಾರಿ; ವಿಶ್ವನಾಥರದ್ದು ಸಾಮಗರ ವೈಖರಿ. ಇವರಿಬ್ಬರನ್ನು ಅಣ್ಣತಮ್ಮಂದಿರೆಂದೇ ತಿಳಿದವರು ಬಹಳ ಮಂದಿ. ಆದರೆ ಅವರದು ಕೇವಲ ಊರಿನ ಹಾಗೂ ಯಕ್ಷಗಾನದ ಸಂಬಂಧ ಮಾತ್ರ. ಕನ್ನಡ ಹಾಗೂ ತುಳುಭಾಷೆಗಳಲ್ಲಿ ಬಹಳ ಸುಂದರವಾಗಿ, ಅಸ್ಖಲಿತ ವಾಗ್ಝರಿಯೊಂದಿಗೆ ಪುಂಖಾನುಪುಂಖವಾಗಿ ಹೊರಹೊಮ್ಮುವ ಶಬ್ದಪುಂಜಗಳಿಂದ ಕೇಳುಗರ ಕಿವಿನಿಮಿರುವಂತೆ ಮಾಡುವ ಲೋಹಚುಂಬಕ ಶಕ್ತಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರದು. ಶಬ್ದಗಳ ದುಂದುವೆಚ್ಚವಿಲ್ಲದೆ ಶ್ರೀಸಾಮಾನ್ಯನನ್ನೂ ಮುಟ್ಟುವಂತೆ ವಿಚಾರವನ್ನು ಮಂಡಿಸುವ ಅವರ ಮಾತಿನ ಶೈಲಿ ಎಲ್ಲರಿಗೂ ಆಪ್ತವಾದುದು. ಆದ್ದರಿಂದಲೇ ಅಭಿಮಾನಿಗಳು ಅವರನ್ನು "ಯಕ್ಷಗಾನ ವಾಚಸ್ಪತಿ' ಎಂದು ಕರೆದರು. ಇದಿರಾಳಿಗೆ ಒಂದಿಷ್ಟೂ ತೊಡಕುಂಟು ಮಾಡದ ಅವರ ಅರ್ಥಗಾರಿಕೆಯನ್ನು ಸಹಕಲಾವಿದರೂ ಇಷ್ಟಪಡುತ್ತಾರೆ.
ಬಂಟ್ವಾಳ ತಾಲೂಕು ಅಜ್ಜಿಬೆಟ್ಟು ಗ್ರಾಮದ ಬಾರ್ಜರಡ್ಡ ಎಂಬಲ್ಲಿ ಜುಲೈ 24, 1957ರಲ್ಲಿ ಜನಿಸಿದ ವಿಶ್ವನಾಥ ಶೆಟ್ಟಿ ದಿ| ಕೊರಗಶೆಟ್ಟಿ ಮತ್ತು ರೇವತಿ ದಂಪತಿಯ ಐದು ಮಂದಿ ಮಕ್ಕಳಲ್ಲಿ ಹಿರಿಯರು. ಅವರಿಗೆ ಏಳನೇ ತರಗತಿಯಲ್ಲೇ ಯಕ್ಷಗಾನದ ಗೀಳು ಹಿಡಿದಿತ್ತು. ಹಾಗೆಂದು ಯಾವುದೇ ಗುರುಕುಲದಲ್ಲಿ ಅವರು ಯಕ್ಷಗಾನ ದೀಕ್ಷೆ ಪಡೆದಿಲ್ಲ. ಏನಿದ್ದರೂ ಅವರದು ಏಕಲವ್ಯ ಸಾಧನೆ. ಆದ್ದರಿಂದಲೇ ಯಕ್ಷಗಾನದ ನಾಟ್ಯ ವಿಭಾಗದಲ್ಲಿ ಅವರು ಅಷ್ಟಕ್ಕಷ್ಟೇ. ಪದವಿಪೂರ್ವ ಶಿಕ್ಷಣ ಪೂರೈಸಿ ಜೀವನ ನಿರ್ವಹಣೆಗೆ ಹೊಟೇಲು, ಎಲ್‌ಐಸಿ ಹೀಗೆ ಬೇರೆ ಬೇರೆ ಉದ್ಯೋಗಗಳನ್ನರಸಿ ಹೋದ ಅವರನ್ನು ಕೊನೆಗೂ ಕೈ ಹಿಡಿದದ್ದು ಯಕ್ಷಗಾನವೇ.
ಕರ್ನೂರು ಕೊರಗಪ್ಪ ರೈಯವರ ಕದ್ರಿ ಮೇಳದ ಮೂಲಕ ಕಲಾವಿದನಾಗಿ ವಿಶ್ವನಾಥ ಶೆಟ್ಟರು ಬೆಳಕಿಗೆ ಬಂದರು. ಕಟೀಲು, ಕರ್ನಾಟಕ, ಸಾಲಿಗ್ರಾಮ, ಮಂಗಳಾದೇವಿ, ಹಿರಿಯಡ್ಕ ಹೀಗೆ ತೆಂಕು-ಬಡಗಿನ ಮೇಳಗಳಲ್ಲಿ ಸುಮಾರು 35 ವರ್ಷಗಳ ತಿರುಗಾಟ ಮಾಡಿರುವ ಅವರು ತಮ್ಮ ವೃತ್ತಿ ಬದುಕಿನೊಂದಿಗೆ ತಾಳಮದ್ದಳೆಗಳಲ್ಲೂ ಕಾಣಿಸಿಕೊಂಡರು. ಪ್ರಸಿದ್ಧರ ಕೂಟಗಳಲ್ಲಿ ಬೇಡಿಕೆಯ ಅರ್ಥಧಾರಿಯೆನಿಸಿಕೊಂಡರು. ರಾಮ, ಕೃಷ್ಣ, ಸುಧನ್ವ, ಭೀಷ್ಮ, ರುಕಾ¾ಂಗದ, ವಿಷ್ಣು, ಈಶ್ವರ, ಪರಶುರಾಮ, ವಿದುರ, ಸಂಜಯ, ಧರ್ಮರಾಯ, ಅರ್ಜುನ, ಕರ್ಣ ಇತ್ಯಾದಿ ಅವರಿಗೆ ಹೆಸರು ತಂದ ಪಾತ್ರಗಳು. ಮಾನಿಷಾದ ಪ್ರಸಂಗದ ವಾಲ್ಮೀಕಿಯ ಪಾತ್ರಚಿತ್ರಣವಂತೂ ಅವರಿಗೇ ಮೀಸಲು. ತುಳು ಪ್ರಸಂಗಗಳಲ್ಲಿ ಪೆರುಮಳ ಬಲ್ಲಾಳ, ಮಲ್ಲಯ್ಯ ಬುದ್ಯಂತ, ಬಂಗರಸು, ಕಾಂತು ಪೂಂಜ, ಕೊಡ್ಸರಾಳ್ವ ಮೊದಲಾದ ಪಾತ್ರಗಳಿಗೆ ಅವರು ಜೀವತುಂಬಿದ್ದಾರೆ.
ಯಕ್ಷಗಾನ ಪ್ರಸಂಗ ರಚನೆಯಲ್ಲಿ ಸಿದ್ಧಕಟ್ಟೆ ಸಿದ್ಧಹಸ್ತರು. ವರ್ಣವೈಷಮ್ಯ, ವಿಷಮಸಮರಂಗ, ಕನ್ಯಾಂತರಂಗ, ಶ್ರೀರಾಮ ಸೇತು, ಶಶಿವಂಶವಲ್ಲರಿ, ಜ್ವಾಲಾ-ಜಾಹ್ನವಿ, ಚಾಣಕ್ಯ ತಂತ್ರ (ಕನ್ನಡ), ಬೊಳ್ಳಿದಂಡಿಗೆ, ಕೆಂಡಸಂಪಿಗೆ, ರತ್ನರಾಧಿಕೆ, ಪಟ್ಟದ ದೈವ, ಗರುಡ ರೇಖೆ (ತುಳು) ಮುಂತಾದ ಅವರ ಪ್ರಸಂಗಗಳು ಮೇಳಗಳಲ್ಲಿ ಜಯಭೇರಿ ಬಾರಿಸಿವೆ. ಆಕಾಶವಾಣಿ, ಸಿ.ಡಿ., ವಿ.ಸಿ.ಡಿ. ಗಳಿಗಾಗಿ ಹತ್ತಾರು ಕಿರುಪ್ರಸಂಗಗಳನ್ನು ಅವರು ಬರೆದಿದ್ದಾರೆ. ಕರ್ನಾಟಕ ಯಕ್ಷಭಾರತಿ, ಪುತ್ತೂರು ತಂಡದೊಂದಿಗೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪಾತ್ರ ವಹಿಸಿದ್ದಾರೆ. ಕಳೆದ ಹದಿಮೂರು ವರ್ಷಗಳಿಂದ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗದ ಸರಣಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಅವರು ಖಾಯಂ ಅರ್ಥಧಾರಿಯಾಗಿದ್ದರು.
ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಅಜೆಕಾರು ಕಲಾಭಿಮಾನ ಬಳಗದ ಯಕ್ಷರûಾ ಪ್ರಶಸ್ತಿ, ಅರುವ ಕೊರಗಪ್ಪ ಶೆಟ್ಟಿ ಪ್ರಶಸ್ತಿ, ಸ್ಕಂದ ಪುರಸ್ಕಾರ ಇತ್ಯಾದಿ ಗೌರವ-ಸಮ್ಮಾನಗಳಿಗೆ ಅವರು ಪಾತ್ರರಾಗಿದ್ದಾರೆ.
ಜುಲೈ 1, 2016ರಂದು ಸಿದ್ಧಕಟ್ಟೆ ವಿಶ್ವನಾಥ ಶೆಟ್ಟರು ಮಾತಿನಲೋಕದಿಂದ ಶಾಶ್ವತವಾಗಿ ನಿರ್ಗಮಿಸಿದರು. ಸುಮಾರು ಐದು ತಿಂಗಳ ಜೀವನ್ಮರಣ ಹೋರಾಟದಲ್ಲಿ ಸಾವಿನ ಕೈ ಮೇಲಾಯ್ತು; ಮಾತು ಮೌನವಾಯ್ತು. ಯಕ್ಷರಂಗದ ಅಶ್ವಿ‌ನೀ ದೇವತೆಗಳಂತಿದ್ದ ಸಿದ್ಧಕಟ್ಟೆದ್ವಯರು ಅಮರಲೋಕದಲ್ಲಿ ಒಂದಾದರೇನೋ.ಆದರೆ ಅವರೊಂದಿಗೆ ಒಡನಾಡಿದ ನಮಗೆ ಅವರ ಅಗಲುವಿಕೆಯನ್ನು ಭರಿಸಲಾದೀತೆ!

ಭಾಸ್ಕರ ರೈ ಕುಕ್ಕುವಳ್ಳಿ

Read more at http://www.udayavani.com/kannada/news/art-culture/157381/vishwanath-shetty-siddhakatte-inside-the-sprite-vachaspati#oPOrVrRyCTMojdI4.99



ನೇಪಥ್ಯಕ್ಕೆ ಸರಿದ ತೆಂಕು ಬಡಗಿನ ಸವ್ಯಸಾಚಿ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ

ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ

ತೆಂಕುತಿಟ್ಟು ಮತ್ತು ಬಡಗುತಿಟ್ಟು ರಂಗಸ್ಥಳವನ್ನು ತನ್ನ ವಾಕ್ಚಾತುರ್ಯದಿಂದ ಶ್ರೀಮಂತಗೊಳಿಸಿ ತಾಳ ಮದ್ದಳೆಯ ಕ್ಷೇತ್ರದಲ್ಲಿಯೂ ಬಹು ಬೇಡಿಕೆಯ ಕಲಾವಿದರಾಗಿ ಅಭಿಮಾನಿಗಳಿಂದ ಯಕ್ಷ ವಾಚಸ್ಮತಿ ಎಂಬ ಬಿರುದನ್ನು ಪಡೆದ ಹಿರಿಯ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿಯವರು ತೀವ್ರವಾದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಸದ್ಯ ಚೇತರಿಸಿಕೊಳ್ಳುತ್ತಾ ಯಕ್ಷಗಾನದಿಂದ ನೇಪಥ್ಯಕ್ಕೆ ಸರಿದಿದ್ದಾರೆ.

ತೆ೦ಕು ಬಡಗಿನಲ್ಲಿ ಬಹು ಬೇಡಿಕೆಯ ವೇಷಧಾರಿ

ತೆಂಕು ಮತ್ತು ಬಡಗುತಿಟ್ಟಿನ ಮೇರು ಕಲಾವಿದರ ಸಾಲಿನಲ್ಲಿ ಕೇಳಿ ಬರುವ ಹೆಸರು ಸಿದ್ದಕಟ್ಟೆ ವಿಶ್ವನಾಥ ಶೆಟ್ಟರದ್ದು. ತಾಳ ಮದ್ದಳೆ ಅರ್ಥಧಾರಿಯಾಗಿ ಕನ್ನಡ ಮತ್ತು ತುಳುವಿನ ಶ್ರೇಷ್ಟ ಮಟ್ಟದ ಪ್ರಸಂಗಕರ್ತರಾಗಿ ಬಹುಮುಖಿ ವ್ಯಕ್ತಿತ್ವ ಹೊಂದಿದ ಇವರು ಸಿದ್ಧಿ ಮತ್ತು ಪ್ರಸಿದ್ಧಿಯ ನೆಲೆಯಲ್ಲಿ ಗುರುತಿಸಲ್ಪಟ್ಟವರು. ಬಡಗುತಿಟ್ಟಿನ ಸಾಲಿಗ್ರಾಮ ಮೇಳದಲ್ಲಿ ಪರಂಪರೆಯ ಪುರುಷ ವೇಷಧಾರಿಗಳು ನಿರ್ವಹಿಸುವ ಭೀಷ್ಮವಿಜಯದ ಪರಶುರಾಮ, ಬ್ರಹ್ಮ ಕಪಾಲದ ಮಹೋಗ್ರ, ಹರಿಶ್ಚಂದ್ರದ ವಸಿಷ್ಟ, ಸೀತಾ ಕಲ್ಯಾಣದ ವಿಶ್ವಾಮಿತ್ರ, ಪಂಚವಟಿಯ ರಾಮ, ಗಧಾಯುದ್ಧದ ಸಂಜಯ, ಕಂಸವಧೆಯ ಅಕ್ರೂರ, ಮುಂತಾದ ಸೌಮ್ಯ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ತೆಂಕಿನಲ್ಲೂ ಅವರ ಜಾಂಬವ, ಪೆರುಮಳ ಬಲ್ಲಾಳ, ಚಂದುಗಿಡಿ, ದೇವಪೂಂಜ ಮುಂತಾದ ಪಾತ್ರಗಳೂ ಸಹ ಅಷ್ಟೇ ಪ್ರಸಿದ್ಧ. ತಾಳ ಮದ್ದಳೆಯಲ್ಲೂ ಮೇರು ಕಲಾವಿದರ ಪಟ್ಟಿಯಲ್ಲಿ ಕಾಣ ಸಿಗುವ ಶೆಟ್ಟರು ಎದುರಾಳಿಗೆ ಯಾವತ್ತೂ ತೊಂದರೆ ಕೊಡದೆ ವಾದವನ್ನು ಸಮರ್ಪಕವಾಗಿ ಮಂಡಿಸಿ ಸಭ್ಯ ಕಲಾವಿದರೆಂದು ಗುರುತಿಸಲ್ಪಟ್ಟಿದ್ದಾರೆ. ಸೌಮ್ಯವಾದ ಸ್ವರ, ವ್ಯಾಕರಣಬದ್ಧ ಶೈಲೀಕೃತ ಮಾತುಗಾರಿಕೆ, ಸ್ಫುಟವಾದ ಮಾತು ಇವರ ಹೆಚ್ಚುಗಾರಿಕೆ. ಹಾಗಾಗಿ ಸೌಮ್ಯ ಪಾತ್ರಗಳಾದ ಪರ್ವದ ಭೀಷ್ಮ, ಸಂಧಾನದ ಕೃಷ್ಣ, ವಿದುರ, ವಾಲಿವಧೆಯ ಸುಗ್ರೀವ, ರಾಮ, ಪಟ್ಟಾಭಿಷೇಕದ ರಾಮ, ಭರತ, ವಿಭೀಷಣ, ಶಲ್ಯ ಮುಂತಾದ ಪಾತ್ರಗಳಲ್ಲಿ ತಾಳ ಮದ್ದಳೆಯ ಕ್ಷೇತ್ರದಲ್ಲಿ ಜನ ಇವರನ್ನು ಬಯಸುತ್ತಾರೆ.

ಪದವಿಪೂರ್ವ ಶಿಕ್ಷಣ ಪಡೆದ ಸುಶಿಕ್ಷಿತ ಕಲಾವಿದ

ಬ೦ಟ್ವಾಳ ತಾಲೂಕು ಅಜ್ಜಿಬೆಟ್ಟು ಎಂಬಲ್ಲಿ ಕೊರಗ ಶೆಟ್ಟಿ ಮತ್ತು ರೇವತಿಯವರ ಪುತ್ರನಾಗಿ 1945ರಲ್ಲಿ ಜನಿಸಿದ ಶೆಟ್ಟರದ್ದು ಯಕ್ಷಗಾನವು ವಂಶೀಯ ಹಿನ್ನಲೆಯಿಂದ ಬಂದಿದ್ದಲ್ಲ. ಪರಿಸರ, ಮತ್ತು ಪರಿಶ್ರಮದಿಂದ ಅರ್ಥಗಾರಿಕೆ ಕಲಿತು ಸ್ವಪ್ರಯತ್ನದಿಂದ ಸುದೀರ್ಘಕಾಲ ಯಕ್ಷರಂಗದಲ್ಲಿ ತೊಡಗಿಸಿಕೊಂಡು ಹೊಸ ವೈಭವವನ್ನು ಸೃಷ್ಟಿಸಿದವರು.
ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ
ಜನನ :1945
ಜನನ ಸ್ಥಳ:ಅಜ್ಜಿಬೆಟ್ಟು, ಬ೦ಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಕರ್ನಾಟಕ ರಾಜ್ಯ
ಕಲಾಸೇವೆ:
ಪ್ರಸಿದ್ಧ ಪ್ರಸ೦ಗಕರ್ತ, ತಾಳಮದ್ದಳೆಯ ಬೇಡಿಕೆಯ ವಾಗ್ಮಿಯಾಗಿ, ಕಟೀಲು, ಕದ್ರಿ, ಕರ್ನಾಟಕ, ಮಂಗಳಾದೇವಿ, ಸಾಲಿಗ್ರಾಮ, ಹಿರಿಯಡ್ಕ ಮೇಳಗಳಲ್ಲಿ ಕಲಾಸೇವೆಗೈದ ಶ್ರೇಷ್ಠ ಕಲಾವಿದ.
ಪದವಿಪೂರ್ವ ಶಿಕ್ಷಣ ಪಡೆದು ಸುಶಿಕ್ಷಿತ ಕಲಾವಿದನೆಂಬ ಹಣೆಪಟ್ಟಿಯೊಂದಿಗೆ ಕಟೀಲು ಮೇಳದಲ್ಲಿ ಗೆಜ್ಜೆ ಕಟ್ಟಿದ ಇವರು ಬಳಿಕ ಕದ್ರಿ, ಕರ್ನಾಟಕ, ಮಂಗಳಾದೇವಿ ಸಾಲಿಗ್ರಾಮ, ಸದ್ಯ ಹಿರಿಯಡ್ಕ ಮೇಳದಲ್ಲಿ ತಿರುಗಾಟ ಮಾಡುತಿದ್ದರು. ದಾಮೋದರ ಮಂಡೆಚ್ಚರು, ಬಲಿಪರು, ಅರುವ ಕೊರಗಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಮಿಜಾರು ಅಣ್ಣಪ್ಪ ಮುಂತಾದವರ ಒಡನಾಡಿಯಾಗಿ ತೆಂಕುತಿಟ್ಟನ್ನು ಪೂರ್ಣ ಮಟ್ಟದಲ್ಲಿ ಅರೆಗಿಸಿಕೊಂಡರು.

ಶೆಟ್ಟರು ಬಡಗುತಿಟ್ಟಿನಲ್ಲಿ ಶ್ರೇಷ್ಟ ಮಟ್ಟದ ನೃತ್ಯಪಟುವಾಗಿ ಗುರುತಿಸಲ್ಪಡದಿದ್ದರೂ, ಹೊಸಪ್ರಸಂಗದಲ್ಲಿ ಅವರ ಸಿದ್ದಿಗೆ ಸರಿಯಾದ ಪಾತ್ರ ದೊರೆಯದಿದ್ದರೂ, ದೊರೆತ ಚಿಕ್ಕಪಾತ್ರವಾದರೂ ಅವರ ಮಾತಿನ ಮೋಡಿಯಿಂದ ಆ ಪಾತ್ರ ರಂಗವನ್ನು ತುಂಬುತಿತ್ತು. ನಾಗಶ್ರೀ ಪ್ರಸಂಗದ ಶುಭ್ರಾಂಗ, ಶ್ವೇತದತ್ತ, ರಂಗನಾಯಕಿ, ಧರ್ಮ ಸಂಕ್ರಾಂತಿ, ಈಶ್ವರಿ ಪರಮೇಶ್ವರಿ, ಅಗ್ನಿ ನಕ್ಷತ್ರ, ಸೂರ್ಯವಂಶಿ ಮುಂತಾದ ಪ್ರಸಂಗಗಳ ಅವರ ಪಾತ್ರಗಳು ಅಪಾರ ಜನ ಮನ್ನಣೆ ಪಡೆದವು.

ಖ್ಯಾತಿವೆತ್ತ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ

ಸಾಲಿಗ್ರಾಮ ಮೇಳದಲ್ಲಿ ಬಡಾಬಡಗಿನ ಮೇರು ಕಲಾವಿದರ ನೃತ್ಯ ವಿಶಿಷ್ಟತೆಯ ಮಧ್ಯವೂ ಇವರು ತಮ್ಮ ಮಾತಿನ ಮೋಡಿಯಿಂದ ಜನಾಕರ್ಷಣೆ ಪಡೆದರು. ಕಥೆಯ ಉಪಸಂಹಾರ ಭಾಗದಲ್ಲಿ ಅವರ ಉಪಸ್ಥಿತಿ ಅನಿವಾರ್ಯವಾಗುತಿತ್ತು. ದೀರ್ಘಕಾಲ ಅಲ್ಲಿ ಶಿರಿಯಾರ ಮಂಜು ನಾಯ್ಕರ ಜಾಗವನ್ನು ಅವರು ಚೌಕಿಯಲ್ಲೂ, ರಂಗದಲ್ಲೂ ಸಮರ್ಪಕವಾಗಿ ತುಂಬಿದ್ದರು. ಯುವ ಕಲಾವಿದರಿಗೆ ಗುರುವಾಗಿ ಅವರು ಸಹಕರಿಸಿದ್ದರು. ಅಲ್ಲಿ ಅವರೇ ರಚಿಸಿ ನಿರ್ದೇಶಿಸಿದ್ದ ಶ್ರೀ ಕೃಷ್ಣ ಪರಂಧಾಮದ ಕೃಷ್ಣನ ಪಾತ್ರ ಅವರಿಗೆ ಅಪಾರ ಕೀರ್ತಿಯನ್ನು ತಂದಿತ್ತಿದೆ. ನಾರಾಯಣ ಶಬರಾಯರ ಭಾಗವತಿಕೆಯಲ್ಲಿ ಯಾಜಿ, ಕೊಂಡದಕುಳಿ, ರಾಜೀವ ಶೆಟ್ಟಿ, ಹಳ್ಳಾಡಿ ಮುಂತಾದವರ ಕೂಡುವಿಕೆಯಲ್ಲಿ ಶ್ರೀ ಕೃಷ್ಣನ ನೋವು ನಲಿವಿನ ಚಿತ್ರಣವನ್ನು ಅವರು ಸೃಷ್ಟಿಸಿದ ರೀತಿ ಹೃದಯಸ್ಪರ್ಶಿಯಾಗಿತ್ತು. ಬಡಗುತಿಟ್ಟಿನ ರಂಗಕ್ಕೆ ಅನಿವಾರ್ಯವಾದ ನೃತ್ಯ ವಿಭಾಗವೊಂದನ್ನುಳಿದು ಬೇರೆಲ್ಲೂ ಅವರು ಸೋಲುವುದಿಲ್ಲ ಆದರೆ ಅದನ್ನು ತೆಂಕುತಿಟ್ಟಿನಲ್ಲಿ ಸಮರ್ಪಕವಾಗಿ ತುಂಬಿದ್ದಾರೆ ಎನ್ನುವುದು ಗಮನಾರ್ಹ.

ಯಶಸ್ವಿ ತುಳು, ಪೌರಾಣಿಕ ಹಾಗೂ ಕ್ಷೇತ್ರ ಪ್ರಸಂಗ ರಚನೆ

ತಾಳಮದ್ದಳೆಯಷ್ಟೇ ಶೆಟ್ಟರ ಇನ್ನೊ0ದು ಯಶಸ್ವಿ ಕ್ಷೇತ್ರ ಪ್ರಸಂಗ ರಚನೆ. ತುಳು ಹಾಗೂ ಪೌರಾಣಿಕ ಪ್ರಸಂಗ ರಚಿಸಿದ ಅವರ ಕನ್ನಡ ಪೌರಾಣಿಕ ಪ್ರಸಂಗ ಯಕ್ಷಗಾನ ರಂಗಭೂಮಿಯಲ್ಲಿ ಗಟ್ಟಿಯಾಗಿ ನಿಂತಿವೆ. ಇಂದಿಗೂ ಎಂದಿಗೂ ಸಾರ್ವಕಾಲಿಕ ಮೌಲ್ಯವುಳ್ಳದ್ದಾಗಿದೆ. ಶ್ರೀ ರಾಮ ಸೇತು, ವರ್ಣವೈಷಮ್ಯ, ವಿಷಮ ಸಮರಂಗ, ಕನ್ಯಾಂತರಂಗ, ಜ್ವಾಲಾ ಜಾಹ್ನವಿ, ಶಶಿವಂಶವಲ್ಲರಿ, ಚಾಣಕ್ಯತಂತ್ರ ಮುಂತಾದ ಪ್ರಸಂಗಗಳು ವಿವಿಧ ಮೇಳಗಳಲ್ಲಿ‌ ಇಂದಿಗೂ ಪ್ರದರ್ಶಿತಗೊಳ್ಳುತ್ತಿವೆ. ಬೆಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ, ಗರುಡರೇಖೆ ಮುಂತಾದ ತುಳು ಪ್ರಸಂಗಗಳು ಸಹ ಜನಪ್ರೀಯವಾಗಿವೆ. ಇತರ ಪ್ರಸಂಗಕರ್ತರ ಸಾಹಿತ್ಯಕ್ಕೆ ಅನೇಕ ಪ್ರಸಂಗಗಳಿಗೆ ಪದ್ಯಬರೆದು ಕೊಡುವುದರಲ್ಲೂ ಅವರು ಸಹಕರಿಸಿದ್ದಾರೆ.

ಶೆಟ್ಟರ ಸಾದನೆಗೆ ಕರ್ನಾಟಕ ಮುಂಬೈಗಳಲ್ಲಿ ಹಲವಾರು ಸನ್ಮಾನಗಳು ಸಂದಿವೆ. ಪ್ರಸಂಗಕರ್ತರಿಗೆ ನೀಡಲ್ಪಡುವ ಸೀತಾನದಿ ಪ್ರಶಸ್ತಿ ಸಹ ಅವರಿಗೆ ಸಂದಿದೆ. ತುಳು ಕನ್ನಡ ಬಾಷೆಗೆ ಸುದೀರ್ಘ ಸೇವೆ ಸಲ್ಲಿಸಿದ ಇವರ ತಮ್ಮ ಸಿದ್ದಕಟ್ಟೆ ಸದಾಶಿವ ಶೆಟ್ಟರು ತೆಂಕುತಿಟ್ಟಿನ ಪ್ರಸಿದ್ದ ಸ್ತ್ರೀವೇಷಧಾರಿಯಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ತೀವ್ರ ಆಘಾತಕ್ಕೊಳಗಾದ ಅವರು ಶೀಘ್ರ ಚೇತರಿಸಿ ಕೊಳ್ಳಲಿ ಎಂಬುದೇ ಕಲಾಭಿಮಾನಿಗಳ ಹಾರೈಕೆ.

Published in Bayalata website :ಶುಕ್ರವಾರ, ಮೇ 6 , 2016
 
 
Late.Siddakatte Vishwanatha Shetty's Funeral function held at Siddakatte Harshali Sabhabhawan on 13/07/2016
In Pic :
Shri.Nalin Kumar kateel (MP)
Shri.Dr.Mohan Alva (Alvas Foundation)
Shri.kishan Hegde
Shri.P.Joshi
Shri.Kumble sundar rao
Shri.Balipa narayan bhagawath
Shri.Shripathi Bhat
Shri.Bhaskar Rai kukkvalli
Shri.Thungappa Bangera
Shri.Dasappa Rai
And all family members and fans of Siddakatte Vishwanatha Shetty.
 
 
 
 
 
























Sunday, 17 July 2016





Eminent Yakshagana artiste both in Tenkuthittu and Badaguthittu, Siddakatte Vishwanath Shetty (59), passed away on Friday after a brief illness.
Born in 1945 at Ajjibettu, Bantwal taluk in Dakshina Kannada district, he was known for his oratory skills and giving life to any role during the performance. He was equally famous in Talamaddale (Yakshagana sans dance) as an eminent interpreter.
Shetty did not have any Yakshagana background but excelled in the art due to persistent efforts. He started the career with Kateel Mela after completing higher secondary education and later worked with Kadri, Karnataka, Mangaladevi and Saligrama Melas. Finally, he was with the Hiriyadka Mela.
Shetty had made name in the roles of Jambava, Perumala Ballala, Chandugidi, Deva Poonja and others in Tenkuthittu while his roles as Parashurama, Mahogra, Vasishta, Bheeshma, Krishna, Vidura, Sugreeva and others in Badaguthittu had brought him wide recognition
 
By : Sudarshan v shetty S/O Late Siddakatte Vishwanatha shetty.