ದಿ| ಚೆನ್ನಪ್ಪ ಶೆಟ್ಟಿ ಸಿದ್ಧಕಟ್ಟೆ ಹಾಗೂ ದಿ| ವಿಶ್ವನಾಥ ಶೆಟ್ಟಿ ಇವರು ಕರಾವಳಿಯ ಅತ್ಯಂತ ಶ್ರೀಮಂತ ಗಂಡುಗಲೆಯೆಂದೇ ಪ್ರಸಿದ್ಧಿ ಪಡೆದ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಬದುಕಿನ ಬಹುಪಾಲು ತೊಡಗಿಸಿಕೊಂಡು, ತೆಂಕು ಬಡಗಿನ ಸವ್ಯಸಾಚಿಗಳೆಂದೇ ವಿಖ್ಯಾತರಾಗಿ, ಆಟ-ಕೂಟಗಳಲ್ಲಿ ಅಗ್ರ ಗಣ್ಯ ಕಲಾವಿದರಾಗಿ, *ಸಿದ್ಧಕಟ್ಟೆ* ಎಂಬ ಹೆಸರನ್ನು ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರಗಳಲ್ಲಿ ಪರಿಚಯಿಸಿದಂತಹ ಅಮೋಘ ಕಲಾವಿದರಾಗಿದ್ದಾರೆ. ತಮ್ಮ ಜೀವನದ ಬದುಕಿನಲ್ಲಿ ಕೊನೆಯ ಉಸಿರಿನವರೆಗೂ ಶಿಸ್ತು, ಪ್ರಾಮಾಣಿಕತೆಯೇ ಬೆಳೆಸಿಕೊಂಡು ಬಂದವರಾಗಿದ್ದು, ಎಲ್ಲಾ ಯಕ್ಷಕಲಾಭಿಮಾನಿಗಳ ಮನೆ-ಮನದಲ್ಲಿ ಯಕ್ಷಗಾನದ ಇಂಪನ್ನು ಅಚ್ಚಳಿಯದೇ ಉಳಿಯುವಂತೆ ಮಾಡಿ, ದೇವರ ಪಾದ ಸೇರಿರುವರು.
ಯಾವುದೇ ಒಂದು ಜನಾಂಗದ ನಿಜವಾದ ಆಸ್ತಿ ಯಾವುದೆಂದರೆ ಕಲೆ ಚಾರಿತ್ರ್ಯ, ತಮ್ಮ ಸಾಧನೆಯ ಮೂಲಕ ಸಿದ್ಧಕಟ್ಟೆ ಹಾಗೂ ಯಕ್ಷ ರಂಗಕ್ಕೆ ಗೌರವವನ್ನು ತಂದುಕೊಟ್ಟ ಸಾಧಕ ರತ್ನಗಳು ಇವರು. ಈ ಕಲಾವಿದರನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದ, ನಿರಂತರವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಆಶಯ. ಈ ಎಲ್ಲಾ ಕಾರ್ಯಕ್ರಮಗಳಿಗೆ ಬುನಾದಿಯೆಂಬಂತೆ ದಿನಾಂಕ 19-11-2016ರಂದು ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ 5:30ರಿಂದ ಬೆಳಗಿನವರೆಗೆ ಶ್ರೀ ಮಹಿಷಮರ್ದಿನಿ ಯಕ್ಷಾಂತರಂಗ ಸಿದ್ಧಕಟ್ಟೆ ಇವರ ಆಶ್ರಯದಲ್ಲಿ ಸಂಸ್ಮರಣೆ ಹಾಗೂ ಯಕ್ಷಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ .
ಈ ನಮ್ಮ ಕಾರ್ಯಕ್ರಮಕ್ಕೆ ತಾವುಗಳು ಬಂದು, ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.
ಸಂದೇಶ್ ಶೆಟ್ಟಿ ಪೊಡುಂಬ, ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶ್ರೀ ಮಹಿಷಮರ್ದಿನಿ ಯಕ್ಷಾಂತರಂಗ, ಸಿದ್ಧಕಟ್ಟೆ
ಯಾವುದೇ ಒಂದು ಜನಾಂಗದ ನಿಜವಾದ ಆಸ್ತಿ ಯಾವುದೆಂದರೆ ಕಲೆ ಚಾರಿತ್ರ್ಯ, ತಮ್ಮ ಸಾಧನೆಯ ಮೂಲಕ ಸಿದ್ಧಕಟ್ಟೆ ಹಾಗೂ ಯಕ್ಷ ರಂಗಕ್ಕೆ ಗೌರವವನ್ನು ತಂದುಕೊಟ್ಟ ಸಾಧಕ ರತ್ನಗಳು ಇವರು. ಈ ಕಲಾವಿದರನ್ನು ಹೊಸ ತಲೆಮಾರಿಗೆ ಪರಿಚಯಿಸುವ ದೃಷ್ಟಿಯಿಂದ, ನಿರಂತರವಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದು ನಮ್ಮ ಆಶಯ. ಈ ಎಲ್ಲಾ ಕಾರ್ಯಕ್ರಮಗಳಿಗೆ ಬುನಾದಿಯೆಂಬಂತೆ ದಿನಾಂಕ 19-11-2016ರಂದು ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ 5:30ರಿಂದ ಬೆಳಗಿನವರೆಗೆ ಶ್ರೀ ಮಹಿಷಮರ್ದಿನಿ ಯಕ್ಷಾಂತರಂಗ ಸಿದ್ಧಕಟ್ಟೆ ಇವರ ಆಶ್ರಯದಲ್ಲಿ ಸಂಸ್ಮರಣೆ ಹಾಗೂ ಯಕ್ಷಾರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ .
ಈ ನಮ್ಮ ಕಾರ್ಯಕ್ರಮಕ್ಕೆ ತಾವುಗಳು ಬಂದು, ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ.
ಸಂದೇಶ್ ಶೆಟ್ಟಿ ಪೊಡುಂಬ, ಅಧ್ಯಕ್ಷರು ಮತ್ತು ಸರ್ವಸದಸ್ಯರು, ಶ್ರೀ ಮಹಿಷಮರ್ದಿನಿ ಯಕ್ಷಾಂತರಂಗ, ಸಿದ್ಧಕಟ್ಟೆ
No comments:
Post a Comment